ಕಾತುರದಿ ಕಾದಿದ್ದ ದಿನವೊಂದು, ಕಣ್ಣೆದುರು ಬಂದು ನಿಂತು, ಕ್ಷಣದಲ್ಲಿ ಕಳೆದು ಹೋದಂತಹ ಅನುಭವ.. ೧೬ ವರುಷಗಳ ದಾರಿಯಲಿ ಜೊತೆ ನಡೆದ ಪ್ರತಿಯೊಬ್ಬರನು ಕರೆದು, ಒಂದೇ ವೇದಿಕೆಯಲ್ಲಿ ಕಾಣೋ ಆ ತವಕವನ್ನ ಆ ದಿನದ ತನಕ ಹಿಡಿದಿಟ್ಟುಕೊಂಡು ಬಂದಿದ್ದ ನೂರಾರು ಮನಕೆ, ಹರ್ಷೋಲ್ಲಾಸದ ಮಳೆ ಬೇಸಿಗೆಯಲ್ಲೂ ತಂಪೆರದಿದ್ದು ಸುಳ್ಳಲ್ಲ.. ಬೇರೆ ಬೇರೆ ದಾರಿಯೊಡನೆ ಬಂದತಹ ಎಲ್ಲರಲ್ಲಿದ್ದಿದ್ದು ಒಂದೇ ಹಸಿವು.. ಬದುಕ ಜಂಜಾಟ ತೊರೆದು, ತನ್ನವರ ಜೊತೆ ನೆಡೆದು.. ನೆನಪ ಮನೆಯೊಳಗೇ ಸರಿಯುವುದು...
ಪ್ರತಿ ವೇದಿಕೆಗೂ ತನ್ನದೇ ಆದ ಆದ್ಯತೆ, ಜವಾಬ್ದಾರಿ ಇದ್ದೆ ಇರುತ್ತದೆ. ಹಾಗೆ ಈ ಒಂದು ಹಳೆ ವಿದ್ಯಾರ್ಥಿಗಳ ಸಂಘದ ಮುಖ್ಯ ಉದ್ದೇಶ ತಮ್ಮ ತಮ್ಮ ಅನಿಸಿಕೆ ವಿನಿಮಯದ ಜೊತೆಗೆ ಪರಸ್ಪರರ ಬೆಳವಣಿಗೆಗೆ ಸಹಾಯವಾಗುವಂತಹ ಕೆಲಸಗಳಿಗೆ ಮುನ್ನುಡಿ ಬರೆಯುವಂತಹ ಹೆಜ್ಜೆಯನ್ನು ಇಡುವಂತಹುದು. ಈ ಒಂದು ಉದ್ದೇಶ ಸಫಲವಾಗೋ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಅವರವರ ಜವಾಬ್ದಾರಿಯನ್ನ ಅರಿತು ನಡೆಯುವುದು ಅತ್ಯವಶ್ಯಕ.
ಒಂದು ವಿಭಾಗವಾಗಿ ಜೀವರಸಾಯನಶಾಸ್ತ್ರ ಅಥವಾ ಆಹಾರ ತಂತ್ರಜ್ಞಾನ ವಿಭಾಗಗಳು ಎಲ್ಲರಿಂದ ಬಯಸೋದು ತನ್ನ ಜೊತೆಗಿನ ನಿರಂತರ ಒಡನಾಟ, ಆ ಮೂಲಕ ತನ್ನ ಏಳಿಗೆಯೊಡನೆ ತನ್ನೆಲ್ಲಾ ಒಡನಾಡಿ(ವಿಧ್ಯಾರ್ಥಿ)ಗಳು ಯಶಸ್ಸಿನ ಹಾದಿಯಲ್ಲಿ ಸಾಗಲಿ ಎನ್ನುವುದು... ಹಾಗಾಗಿ ನಿಮ್ಮೆಲ್ಲರ ಪ್ರಾಮಾಣಿಕ ಅಭಿಪ್ರಾಯ, ಸಲಹೆ-ಸಹಕಾರ ಎಲ್ಲವೂ ಸಹ ಇಲ್ಲಿ ಅತ್ಯಮೂಲ್ಯ. ನಿಮ್ಮ ಗಮನಕ್ಕೆ ಬಂದಂತಹ ಉದ್ಯೋಗವಕಾಶಗಳು, ವಿಜ್ಞಾನದಲ್ಲಿ ಆದ ಹೊಸ ಹೊಸ ಆವಿಷ್ಕಾರಗಳು ಹಾಗೂ ಶೈಕ್ಷಣಿಕ ಬದುಕಲ್ಲಿ ವಿದ್ಯಾರ್ಥಿಗಳ ಬೆಳವಣಿಗೆಗೆ ಪೂರಕವಾಗಿರುವಂತಹ ಸಂಗತಿಗಳನ್ನು ಹಂಚಿಕೊಂಡರೆ ಅದೂ ಕೂಡಾ ವಿಜ್ಞಾನ ಕ್ಷೇತ್ರಕ್ಕೆ ತಾ ಮಾಡಿದ ಚಿಕ್ಕ ನೆರವು ಅಂತ ಅನಿಸಿಕೊಳ್ಳುತ್ತದೆ.
ಕೈ ಹಿಡಿದು ಶುರು ಮಾಡಿರುವ ನಮ್ಮ ಈ ಪ್ರಯಾಣವನ್ನ ಜೊತೆ ಬಿಡದೆ ನಡೆಸಿಕೊಂಡು ಹೋಗುವಂತಹ ಪ್ರಮಾಣವನ್ನ ನಾವೆಲ್ಲರೂ ಈಗ ಮಾಡಬೇಕಾಗಿದೆ. ಆ ರೀತಿಯಲ್ಲಿ
ಪ್ರಪ್ರಥಮವಾಗಿ ಅಂತಹ ವೇದಿಕೆಯ ಸಿದ್ದತೆಗೆ ಕೈಜೋಡಿಸಿದ ಪ್ರತಿಯೊಬ್ಬರಿಗೂ, ಭಾಗಿಯಾದ ಪ್ರತಿಯೋರ್ವರಿಗೂ ಸ್ನೇಹಪೂರ್ವಕ ವಂದನೆಗಳು...
ಪ್ರತಿ ವೇದಿಕೆಗೂ ತನ್ನದೇ ಆದ ಆದ್ಯತೆ, ಜವಾಬ್ದಾರಿ ಇದ್ದೆ ಇರುತ್ತದೆ. ಹಾಗೆ ಈ ಒಂದು ಹಳೆ ವಿದ್ಯಾರ್ಥಿಗಳ ಸಂಘದ ಮುಖ್ಯ ಉದ್ದೇಶ ತಮ್ಮ ತಮ್ಮ ಅನಿಸಿಕೆ ವಿನಿಮಯದ ಜೊತೆಗೆ ಪರಸ್ಪರರ ಬೆಳವಣಿಗೆಗೆ ಸಹಾಯವಾಗುವಂತಹ ಕೆಲಸಗಳಿಗೆ ಮುನ್ನುಡಿ ಬರೆಯುವಂತಹ ಹೆಜ್ಜೆಯನ್ನು ಇಡುವಂತಹುದು. ಈ ಒಂದು ಉದ್ದೇಶ ಸಫಲವಾಗೋ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಅವರವರ ಜವಾಬ್ದಾರಿಯನ್ನ ಅರಿತು ನಡೆಯುವುದು ಅತ್ಯವಶ್ಯಕ.
ಒಂದು ವಿಭಾಗವಾಗಿ ಜೀವರಸಾಯನಶಾಸ್ತ್ರ ಅಥವಾ ಆಹಾರ ತಂತ್ರಜ್ಞಾನ ವಿಭಾಗಗಳು ಎಲ್ಲರಿಂದ ಬಯಸೋದು ತನ್ನ ಜೊತೆಗಿನ ನಿರಂತರ ಒಡನಾಟ, ಆ ಮೂಲಕ ತನ್ನ ಏಳಿಗೆಯೊಡನೆ ತನ್ನೆಲ್ಲಾ ಒಡನಾಡಿ(ವಿಧ್ಯಾರ್ಥಿ)ಗಳು ಯಶಸ್ಸಿನ ಹಾದಿಯಲ್ಲಿ ಸಾಗಲಿ ಎನ್ನುವುದು... ಹಾಗಾಗಿ ನಿಮ್ಮೆಲ್ಲರ ಪ್ರಾಮಾಣಿಕ ಅಭಿಪ್ರಾಯ, ಸಲಹೆ-ಸಹಕಾರ ಎಲ್ಲವೂ ಸಹ ಇಲ್ಲಿ ಅತ್ಯಮೂಲ್ಯ. ನಿಮ್ಮ ಗಮನಕ್ಕೆ ಬಂದಂತಹ ಉದ್ಯೋಗವಕಾಶಗಳು, ವಿಜ್ಞಾನದಲ್ಲಿ ಆದ ಹೊಸ ಹೊಸ ಆವಿಷ್ಕಾರಗಳು ಹಾಗೂ ಶೈಕ್ಷಣಿಕ ಬದುಕಲ್ಲಿ ವಿದ್ಯಾರ್ಥಿಗಳ ಬೆಳವಣಿಗೆಗೆ ಪೂರಕವಾಗಿರುವಂತಹ ಸಂಗತಿಗಳನ್ನು ಹಂಚಿಕೊಂಡರೆ ಅದೂ ಕೂಡಾ ವಿಜ್ಞಾನ ಕ್ಷೇತ್ರಕ್ಕೆ ತಾ ಮಾಡಿದ ಚಿಕ್ಕ ನೆರವು ಅಂತ ಅನಿಸಿಕೊಳ್ಳುತ್ತದೆ.
ಕೈ ಹಿಡಿದು ಶುರು ಮಾಡಿರುವ ನಮ್ಮ ಈ ಪ್ರಯಾಣವನ್ನ ಜೊತೆ ಬಿಡದೆ ನಡೆಸಿಕೊಂಡು ಹೋಗುವಂತಹ ಪ್ರಮಾಣವನ್ನ ನಾವೆಲ್ಲರೂ ಈಗ ಮಾಡಬೇಕಾಗಿದೆ. ಆ ರೀತಿಯಲ್ಲಿ
ನಮ್ಮ ಮನೆಯಂಗಳದಲ್ಲಿ ಕಟ್ಟಿದ
ನೆನಪಿನ ತೋರಣ ಸದಾ ಹಸಿರಾಗಿರಲಿ
ಇಟ್ಟಕನುಸುಗಳ ಚುಕ್ಕಿ, ಎರಚಿದ ಭಾವನೆಗಳ ರಂಗು
ಬಾನೆತ್ತರಕೆ ತಾಗಲಿ...
ಗರಿಬಲಿತ ಹಕ್ಕಿಗಳೇ.... ಗೂಡ ನೆನೆದು ಬಂದಿರಿ...
ನೆನಪಿನೂಟ ಸವಿದಿರಿ, ಕನಸ ಕಣ್ಣ ತೆರೆದಿರಿ...
ಕಳೆದ ಕ್ಷಣಗಳ ಕರೆದಿರಿ...
ಧನ್ಯವಾದಗಳು ನಿಮಗೆ....
ನಗು, ಯಶಸ್ಸು ಸದಾ ನಿಮ್ಮ ಹಿಂದೆ ಬರಲಿ...
ಜೊತೆ ಇರುವ ಕನಸು ನೆನಪಿನಲ್ಲಿರಲಿ....
ವಂದನೆಗಳು....
- ರೋಹಿತ್ ಕುಮಾರ್ ಹೆಚ್.ಜಿ.
ವಿಧ್ಯಾರ್ಥಿ
ಜೀವರಸಾಯನಶಾಸ್ತ್ರ ವಿಭಾಗ
ದಾವಣಗೆರೆ ವಿಶ್ವವಿಧ್ಯಾಲಯ
ದಾವಣಗೆರೆ
Email: rohit.biogem@gmail.com
Mob: +91-9620496302